ಒಮ್ಮೆ ಹೂದೋಟದಲಿ …

ಒಮ್ಮೆ ಹೂದೋಟದಲಿ
ಒಮ್ಮೆ ಕೆಳೆಕೂಟದಲಿ
ಒಮ್ಮೆ ಶಾಸ್ತ್ರದಲಿ
ಒಮ್ಮೆ ಸಂಸರದಲಿ
ಮತ್ತೊಮ್ಮೆ ಮೌನದಲಿ
ಬ್ರಹ್ಮಾನುಭವಿಯಾಗು ಮಂಕುತಿಮ್ಮ !!!

Leave a Comment

ಪುಸ್ತಕದ ಅರಿವು

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ
ಚಿತ್ತದಲಿ ದೊರೆತರಿವು ತರು ತಳೆದ ಪುಷ್ಪ !
ವಸ್ತು ಸಾಕ್ಷಾತ್ಕಾರ ಅಂತರೀಕ್ಷಣೆಯಿಂದ
ಶಾಸ್ತ್ರಿತನದಿಂದಲ್ಲ ಮಂಕುತಿಮ್ಮ !!.

ಡಾ || ಡಿ.ವಿ.ಜಿ

Leave a Comment

ಪ್ರೇಮಿ

ನಿನ್ನ ನೋಡುತ ನಾನು ಕುಳಿತರೆ
ನನ್ನನೇ ನಾ ಮರೆತೇ
ನಿನ್ನ ಬಗ್ಗೆ ನಾ ಹಾಡಿದರೆ
ಅದುವೇ ಒಂದು ಕವಿತೆ

ಕಾಲ ಹರಣವ ಮಾಡ ಬೇಡವೋ
ಅಂತ ಹೇಳಿದ ಆ ಜ್ಞಾನಿ
ಇಂತ ಸಮಯವ ಬಿಡುವನೆ ?
ಈ ಪ್ರೇಮಿ !!

Leave a Comment

ಈ ಪಯಣ…

ಈ  ಪಯಣ
ಬಲು  ಕಠಿಣ
ಆದರೇನಂತೆ ಆಗು ನೀ ಜಾಣ

ನಡು  ನದಿಯಲಿ  ಸಿಕ್ಕ  ಈ  ದೋಣಿ
ತಳಮಲಿಸಿದೆ  ಕಾಣದೆ  ದಡ
ತಾಳ್ಮೆ  ಇರಲಿ  ನೀ  ಕೇಳು
ನಿನ್ನ  ಎದುರು  ಇಹುದು  ಆ  ದಾರಿ
ನಿನ್ನ  ಕಣ್ಣಿಗೆ  ಕಾಣುತ್ತಿಲ್ಲವಷ್ಟೇ

ಅಮಾವಾಸ್ಯ  ಕತ್ತಲೆ  ಕವಿದಿರಲು
ಚಢಪಡಿಸುತಿರುವೆ ಏನೋ  ಹುಡುಕಾಟ
ಒಳದೀಪದ ಬೆಳಕಲಿ  ನೀ ನೋಡು
ನಿನ್ನ  ಪಕ್ಕದಲ್ಲಿ  ಇಹುದು
ನೀ ಹುಡುಕುತ್ತಿರುವುದು

Leave a Comment

ಉತ್ತಮ

ಉತ್ತಮವಾದ ಕೆಲಸಗಳನ್ನು ಮಾಡು , ಕೆಲಸಗಳನ್ನು ಉತ್ತಮವಾಗಿ ಮಾಡು.

Leave a Comment

ನೆನ್ನೆ ಕೆಲಸಗಳು

ನೆನ್ನೆ  ಕೆಲಸಗಳು
ಇಂದಿನ  ಸಮಯ  ತಿಂದರೆ
ಮುಂದೆ  ಹೋಗೋ  ಮಾತೆಲ್ಲಿ ?

ಕೆಸರಲ್ಲಿ  ಬಿದ್ದವ
ಸಿಕ್ಕ  ಹುಲ್ಲನು  ಬಿಟ್ಟರೆ
ಬದುಕುವ  ಮಾತೆಲ್ಲಿ ?

Leave a Comment

ನಾವು ಬೇಜಾರು ಮಾಡಿಕೊಳ್ಳಬಾರದು

ನಾವು  ಬೇಜಾರು ಮಾಡಿಕೊಳ್ಳಬಾರದು  , ಅಪ್ಪಿ ತಪ್ಪಿ ಬೇರೆಯವರಿಗೆ ಬೇಜಾರು ಆದ್ರೆ ನಾವೇನು ಮಾಡೋಕೆ ಆಗೋಲ್ಲ. ಇಲ್ಲಿ ಮುಖ್ಯವಾಗಿ ನಾವು ಆರಾಮಾಗಿ ಇರ್ಬೇಕು .

ಉದಾಹರಣೆಗೆ ,ನಮ್ಮ ಮ್ಯಾನೇಜರ್ ಏನಾದ್ರು ನಮ್ಮ ಮೇಲೆ ಉರಿದು ಬಿದ್ರೆ , ಅದು ನಮ್ಮ ತಪ್ಪ ? ಪ್ರಾಜೆಕ್ಟ್ ಏನಾದ್ರು  ಮಠ ಹತ್ತಿದರೆ ಅದು ಪ್ರಾಜೆಕ್ಟ್ ಹಣೆಬರಹ ಅಲ್ವ ?

ಯಾರೋ ಪೆದ್ದು ಪೆದ್ದು ಪ್ರಶ್ನೆ ಕೇಳ್ತಾರೆ , ಉತ್ತರ ಕೊಟ್ಟು ಯಾಕೆ ಉಗಿಸಿಕೊಳ್ಳಬೇಕು ? ಅದಕ್ಕಿಂತ ಸುಮ್ಮನಿರೋದು ವಾಸಿ ಅಲ್ವ ?

ಈಗೆ ಚಿಕ್ಕ ಚಿಕ್ಕ ವಿಷಯಗಳಿಗೆಲ್ಲ ನಾವು ಬೇಜಾರು ಕೋಪ ಮಾಡಿಕೊಳ್ಳು ತಿದ್ರೆ , ನಮ್ಮ ಆರೋಗ್ಯದ ಗತಿ ಏನು ?

Leave a Comment

ಜೋರಾಗಿ ಹೇಳು

ಹೇಳುವುದನ್ನು ಜೋರಾಗಿ ಹೇಳು … ಬುದ್ದಿವಂತರು ಮತ್ತೊಮ್ಮೆ ಯೋಚಿಸುತ್ತಾರೆ, ಮೂರ್ಖರು ನಂಬುತ್ತಾರೆ !!!

-ಸುಭಾಷಿತ

Leave a Comment

ಹೆಚ್ಚು-ಕಡಿಮೆ

ಮಂಗಳಾರತಿ ತಗೊಂಡ್ರೆ ಉಷ್ಣ
ತೀರ್ಥ ತಗೊಂಡ್ರೆ ಶೀತ !!!

Leave a Comment

ಇರಲಾರದೆ…

ಇರಲಾರದೆ ಇರುವೆ ಬಿಟ್ಟುಕೊಂಡರಂತೆ !!!

Leave a Comment

Follow

Get every new post delivered to your Inbox.